|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಕ್ಕರೆ ಕಾಯಿಲೆ ಇದು ಒಂದು ಸಾಮಾನ್ಯ ರೋಗವಾಗಿ ಕಂಡುಬರುತ್ತಿದೆ ಹಾಗೂ ರೀಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿಯಲ್ಲಿ ವೈದ್ಯ ವಿಜ್ಞಾನವೂ ಸಾಕಷ್ಟು ವೈದ್ಯಕೀಯ ಸತ್ಯಗಳನ್ನು ಹೊರಹಾಕುತ್ತಿದೆ. ಜನಸಾಮಾನ್ಯರಿಗೆ ಈ ವೈದ್ಯ ವಿಜ್ಞಾನದ ಸೂತ್ರ ಸುತ್ರಗಳನ್ನು ದಿನನಿತ್ಯದ ಬಳಕೆಗೆ ತರುವುದು ಹಾಗೂ ಅಗತ್ಯ ವೈಜ್ಞಾನಿಕ ಮಾಹಿತಿಯನ್ನು ನೀಡುವುದು ವೈದ್ಯ ಸಾಹಿತ್ಯದ ಮೂಲೋದ್ದೇಶ. ಸಕ್ಕರೆ ಕಾಯಿಲೆಯನ್ನು ಕೂಡಲೆ ಗುರಿತಿಸಿ ಮುಂದಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟವಲ್ಲಿ ಡಾ. ಪ್ರಕಾಶ್ ಸಿ ರಾವ್ ಅವರ ಈ ಕೃತಿ ಜನಸಾಮಾನ್ಯರಿಗೆ ಪ್ರಯೋಜನಕವಾಗಲಿದೆ.
|
ಡಾ. ಪ್ರಕಾಶ್ ಸಿ ರಾವ್ ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತಿಯಲ್ಲಿ ತೊಡಗಿದ್ದಾರೆ. ಇವರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಪ್ರಾರಂಭಿದಿಂದಲೂ ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯ ಸಮಯದಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದರೆ.
|
|
| |
|
|
|
|
|
|
|
|
|