![ಸಿ ವಿ ರಾಮನ್ (ವಿಶ್ವಮಾನ್ಯರು)|C V Raman - Biography (Vishwamanyaru Series)](https://navakarnataka.com/public/assets/nvks3/books/books-2565.jpg)
ಸಿ ವಿ ರಾಮನ್ (ವಿಶ್ವಮಾನ್ಯರು)|C V Raman - Biography (Vishwamanyaru Series)
MRP - ₹40.00 ₹36.00
ಚಂದ್ರಶೇಖರ ವೆಂಕಟರಾಮನ್ (1888-1970) ಸಿ.ವಿ. ರಾಮನ್ ಎಂದೇ ಖ್ಯಾತರು. ಭಾರತದ ಆದ್ಯ ಭೌತ ಶಾಸ್ತ್ರಜ್ಞರು. 1930ರಲ್ಲಿ ‘ಬೆಳಕಿನ ಚೆದುರುವಿಕೆ‘ಯ ಮೇಲೆ ಸಂಶೋಧನೆಯನ್ನು ನಡೆಸಿದುದಕ್ಕಾಗಿ ‘ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ‘ಯನ್ನು ಪಡೆದರು. ರಾಮನ್ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ, ಪ್ರಥಮ ಏಷಿಯನ್ ಹಾಗೂ ಪ್ರಥಮ ಶ್ವೇತೇತರ ವ್ಯಕ್ತಿ! 1954ರಲ್ಲಿ ಭಾರತ ಸರ್ಕಾರವು ಸಿ.ವಿ. ರಾಮನ್ ಅವರಿಗೆ ‘ಭಾರತರತ್ನ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಮನ್ ವಿಜ್ಞಾನವನ್ನು ಸ್ವಸಾಮರ್ಥ್ಯದಿಂದ ಕಲಿತದ್ದು ಅವರ ದೊಡ್ಡ ಹಿರಿಮೆ. ರಮನ್ ಕಲ್ಕತ್ತದ ‘ಇಂಡಿಯನ್ ಅಸೊಸಿಯೇಶನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್‘ ಸಂಸ್ಥೆಯಲ್ಲಿ ತಮ್ಮ ಸಹೋದ್ಯೋಗಿ ಕೆ.ಎಸ್. ಕೃಷ್ಣನ್ ಜತೆಗೂಡಿ ಕೆಲಸ ಮಾಡುವಾಗ, ಫೆಬ್ರವರಿ 28, 1928ರಂದು ಬೆಳಕಿನ ಚೆದುರುವಿಕೆಗೆ ಸಂಬಂಧಿಸಿದ ಹಾಗೆ ನಿರ್ಣಾಯಕ ಫಲಿತಾಂಶವನ್ನು ಪಡೆಯುತ್ತಾರೆ. ಆದರೆ ರಾಮನ್ ನೊಬೆಲ್ ಪಾರಿತೋಷಕವನ್ನು ಕೃಷ್ಣನ್ ಜೊತೆ ಹಂಚಿಕೊಳ್ಳುವುದಿಲ್ಲ. ನೊಬೆಲ್ ಪ್ರಶಸ್ತಿ ಪತ್ರದಲ್ಲಿ ಕೃಷ್ಣನ್ ಅವರ ಹೆಸರು ಹಾಗೂ ಅವರು ಸಲ್ಲಿಸಿರುವ ನೆರವಿನ ಸ್ಮರಣೆಯಿದೆ. ಸರ್ ಸಿ.ವಿ. ರಾಮನ್ ಸದಾ ಕಾಲಕ್ಕೂ ಭಾರತೀಯರಿಗೆ ಸ್ಫೂರ್ತಿದಾಯಕ ವಿಜ್ಞಾನಿ. ರಾಮನ್ ಬದುಕು-ಸಾಧನೆಯನ್ನು ಡಾ|| ವಸುಂಧರಾ ಭೂಪತಿಯವರು ಸೊಗಸಾಗಿ ಪರಿಚಯಿಸಿದ್ದಾರೆ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಚಂದ್ರಶೇಖರ ವೆಂಕಟರಾಮನ್ (1888-1970) ಸಿ.ವಿ. ರಾಮನ್ ಎಂದೇ ಖ್ಯಾತರು. ಭಾರತದ ಆದ್ಯ ಭೌತ ಶಾಸ್ತ್ರಜ್ಞರು. 1930ರಲ್ಲಿ ‘ಬೆಳಕಿನ ಚೆದುರುವಿಕೆ‘ಯ ಮೇಲೆ ಸಂಶೋಧನೆಯನ್ನು ನಡೆಸಿದುದಕ್ಕಾಗಿ ‘ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ‘ಯನ್ನು ಪಡೆದರು. ರಾಮನ್ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ, ಪ್ರಥಮ ಏಷಿಯನ್ ಹಾಗೂ ಪ್ರಥಮ ಶ್ವೇತೇತರ ವ್ಯಕ್ತಿ! 1954ರಲ್ಲಿ ಭಾರತ ಸರ್ಕಾರವು ಸಿ.ವಿ. ರಾಮನ್ ಅವರಿಗೆ ‘ಭಾರತರತ್ನ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಮನ್ ವಿಜ್ಞಾನವನ್ನು ಸ್ವಸಾಮರ್ಥ್ಯದಿಂದ ಕಲಿತದ್ದು ಅವರ ದೊಡ್ಡ ಹಿರಿಮೆ. ರಮನ್ ಕಲ್ಕತ್ತದ ‘ಇಂಡಿಯನ್ ಅಸೊಸಿಯೇಶನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್‘ ಸಂಸ್ಥೆಯಲ್ಲಿ ತಮ್ಮ ಸಹೋದ್ಯೋಗಿ ಕೆ.ಎಸ್. ಕೃಷ್ಣನ್ ಜತೆಗೂಡಿ ಕೆಲಸ ಮಾಡುವಾಗ, ಫೆಬ್ರವರಿ 28, 1928ರಂದು ಬೆಳಕಿನ ಚೆದುರುವಿಕೆಗೆ ಸಂಬಂಧಿಸಿದ ಹಾಗೆ ನಿರ್ಣಾಯಕ ಫಲಿತಾಂಶವನ್ನು ಪಡೆಯುತ್ತಾರೆ. ಆದರೆ ರಾಮನ್ ನೊಬೆಲ್ ಪಾರಿತೋಷಕವನ್ನು ಕೃಷ್ಣನ್ ಜೊತೆ ಹಂಚಿಕೊಳ್ಳುವುದಿಲ್ಲ. ನೊಬೆಲ್ ಪ್ರಶಸ್ತಿ ಪತ್ರದಲ್ಲಿ ಕೃಷ್ಣನ್ ಅವರ ಹೆಸರು ಹಾಗೂ ಅವರು ಸಲ್ಲಿಸಿರುವ ನೆರವಿನ ಸ್ಮರಣೆಯಿದೆ. ಸರ್ ಸಿ.ವಿ. ರಾಮನ್ ಸದಾ ಕಾಲಕ್ಕೂ ಭಾರತೀಯರಿಗೆ ಸ್ಫೂರ್ತಿದಾಯಕ ವಿಜ್ಞಾನಿ. ರಾಮನ್ ಬದುಕು-ಸಾಧನೆಯನ್ನು ಡಾ|| ವಸುಂಧರಾ ಭೂಪತಿಯವರು ಸೊಗಸಾಗಿ ಪರಿಚಯಿಸಿದ್ದಾರೆ.
Books from ವಸುಂಧರಾ ಭೂಪತಿ, Vasundhara Bhupathi
![Author-Image](https://navakarnataka.com/public/assets/nvks3/authors/authors-1057542409-Dr.-Vasundhara-Bhupathi.jpg)