
ಡಾ. ಕೃಷ್ಣಾನಂದ ಕಾಮತ್ (ವಿಶ್ವಮಾನ್ಯರು)|Dr. Krishnananda Kamath : Biography (Vishwamanyaru Series)
MRP - ₹30.00 ₹27.00
ಅಮೆರಿಕದಲ್ಲಿ ಪಿಎಚ್ ಡಿ ಮಾಡಿ, ಅಮೆರಿಕದ 35 ರಾಜ್ಯಗಳಲ್ಲಿ ಓಡಾಡಿ, 22 ರಾಜ್ಯಗಳ ಅರಣ್ಯವನ್ನು ಅಧ್ಯಯನ ಮಾಡಿದ್ದ ವಿಜ್ಞಾನಿ, ಅಮೆರಿಕ ಸರ್ಕಾರ ನೀಡಿದ ಕೆಲಸವನ್ನು ತಿರಸ್ಕರಿಸಿ ಭಾರತಕ್ಕೆ ಬಂದ ಯುವ ವಿಜ್ಞಾನಿಯನ್ನು ಜನರು ಹಾಸ್ಯ ಮಾಡಿದರು. ಆಗ ಆ ಯುವ ವಿಜ್ಞಾನಿಯು "ಹೊಟ್ಟೆ ಹೊರೆಯುವುದಕ್ಕಾಗಿ ಶಿಕ್ಷಣ ಎಂದು ಹೇಳುವುದು ತಪ್ಪು ಗ್ರಹಿಕೆ. ವಿದ್ಯಾಭ್ಯಾಸದ ಮೂಲ ಉದ್ದೇಶ ಮಾನವನ ಮಾನಸಿಕ ವಿಕಾಸ. ಮಾನವನಿಗೆ ಸುಖ-ಸಂಪತ್ತುಗಳಿಗಿಂತ ಆತ್ಮಗೌರವ, ದೇಶಾಭಿಮಾನಗಳು ಹೆಚ್ಚಿನ ನೆಮ್ಮದಿಯನ್ನು ಕೊಡಬಲ್ಲವು. ಹಣ ಸಂಪಾದನೆಗಾಗಿ ಯಾಂತ್ರಿಕವಾಗಿ ಜೀವಿಸುವುದೆಂದರೆ ಆದರ್ಶಗಳಿಗೆ ತಿಲಾಂಜಲಿಯನ್ನು ಕೊಟ್ಟಂತೆ" ಎಂದು ನುಡಿದರು. ಅವರೇ ಡಾ|| ಕೃಷ್ಣಾನಂದ ಲಕ್ಷ ್ಮಣ ಕಾಮತ್. ಕಾಮತರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಹೇಗೆ ಸರಳವಾಗಿ ಹೇಳಬಹುದು ಎನ್ನುವುದನ್ನು ತೋರಿಸಿಕೊಟ್ಟ ಆದ್ಯರು. ಛಾಯಾಗ್ರಹಣ, ರೇಖಾಚಿತ್ರಗಳು ಹಾಗೂ ಜಲವರ್ಣ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ಅಮೆರಿಕದಲ್ಲಿ ಪಿಎಚ್ ಡಿ ಮಾಡಿ, ಅಮೆರಿಕದ 35 ರಾಜ್ಯಗಳಲ್ಲಿ ಓಡಾಡಿ, 22 ರಾಜ್ಯಗಳ ಅರಣ್ಯವನ್ನು ಅಧ್ಯಯನ ಮಾಡಿದ್ದ ವಿಜ್ಞಾನಿ, ಅಮೆರಿಕ ಸರ್ಕಾರ ನೀಡಿದ ಕೆಲಸವನ್ನು ತಿರಸ್ಕರಿಸಿ ಭಾರತಕ್ಕೆ ಬಂದ ಯುವ ವಿಜ್ಞಾನಿಯನ್ನು ಜನರು ಹಾಸ್ಯ ಮಾಡಿದರು. ಆಗ ಆ ಯುವ ವಿಜ್ಞಾನಿಯು "ಹೊಟ್ಟೆ ಹೊರೆಯುವುದಕ್ಕಾಗಿ ಶಿಕ್ಷಣ ಎಂದು ಹೇಳುವುದು ತಪ್ಪು ಗ್ರಹಿಕೆ. ವಿದ್ಯಾಭ್ಯಾಸದ ಮೂಲ ಉದ್ದೇಶ ಮಾನವನ ಮಾನಸಿಕ ವಿಕಾಸ. ಮಾನವನಿಗೆ ಸುಖ-ಸಂಪತ್ತುಗಳಿಗಿಂತ ಆತ್ಮಗೌರವ, ದೇಶಾಭಿಮಾನಗಳು ಹೆಚ್ಚಿನ ನೆಮ್ಮದಿಯನ್ನು ಕೊಡಬಲ್ಲವು. ಹಣ ಸಂಪಾದನೆಗಾಗಿ ಯಾಂತ್ರಿಕವಾಗಿ ಜೀವಿಸುವುದೆಂದರೆ ಆದರ್ಶಗಳಿಗೆ ತಿಲಾಂಜಲಿಯನ್ನು ಕೊಟ್ಟಂತೆ" ಎಂದು ನುಡಿದರು. ಅವರೇ ಡಾ|| ಕೃಷ್ಣಾನಂದ ಲಕ್ಷ ್ಮಣ ಕಾಮತ್. ಕಾಮತರು ಬಹುಮುಖ ಪ್ರತಿಭೆಯುಳ್ಳವರಾಗಿದ್ದರು. ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಹೇಗೆ ಸರಳವಾಗಿ ಹೇಳಬಹುದು ಎನ್ನುವುದನ್ನು ತೋರಿಸಿಕೊಟ್ಟ ಆದ್ಯರು. ಛಾಯಾಗ್ರಹಣ, ರೇಖಾಚಿತ್ರಗಳು ಹಾಗೂ ಜಲವರ್ಣ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ಆಧುನಿಕ ಭಾರತ, ಜಗತ್ತನ್ನು ಬದಲಾಯಿಸುವುದು ಹೇಗೆ (ಭಾಷಾಂತರ).: ಸರಸ್ವತಿದೇವಿ ಗೌಡರ, ಪಂಡಿತ ರಮಾಬಾಯಿ ಸರಸ್ವತಿ, ಸಾವಿತ್ರಿಬಾಯಿ ಫುಲೆ, ಆರ್. ಕಲ್ಯಾಣಮ್ಮ, ಪದ್ಮಾಶೆಣೈ, ಪ್ರೇಮಾಕಾರಂತ, ಗಂಗೂಬಾಯಿ ಹಾನಗಲ್(ಬದುಕು-ಬರಹ). ಸ್ತ್ರೀ ವಿಮುಕ್ತಿ ಚಿಂತನೆ ಒಂದು ಅಧ್ಯಯನ, ಕತೆಯಾದಳು ಹುಡುಗಿ (ಸಂಶೋಧನೆ),. ಕನ್ನಡ ಕಥನ ಸಾಹಿತ್ಯ ಮತ್ತು ಸ್ತ್ರೀ ನಿರ್ವಚನ (ಮಹಾ ಪ್ರಬಂಧ), ಅಂಚಿತ (ವಿಮರ್ಶೆ), ವಿಶೇಷ ಲೇಖಕಿ, ದೇವರು ಧರ್ಮದ ಚಿಂತೆ, ಅನನ್ಯ, ಸಮೃದ್ದಿ (ಕೆ, ಉಷಾಪಿ ರೈ ಅಭಿನಂದನಾ ಗ್ರಂಥ), ಕಮಲಾದೇವಿ ಚಟ್ಟೋಪಾಧ್ಯಾಯ (ಸಂಪಾದನೆ/ಸಹ ಸಂಪಾದನೆ). ಇವರ ‘ಕಾಳಿಗಂಗಾ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.
Books from ಗೀತಾ ಶೆಣೈ , Geetha Shenoy

ಗೀತಾ ಶೆಣೈ , Geetha Shenoy
About Author
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ಆಧುನಿಕ ಭಾರತ, ಜಗತ್ತನ್ನು ಬದಲಾಯಿಸುವುದು ಹೇಗೆ (ಭಾಷಾಂತರ).: ಸರಸ್ವತಿದೇವಿ ಗೌಡರ, ಪಂಡಿತ ರಮಾಬಾಯಿ ಸರಸ್ವತಿ, ಸಾವಿತ್ರಿಬಾಯಿ ಫುಲೆ, ಆರ್. ಕಲ್ಯಾಣಮ್ಮ, ಪದ್ಮಾಶೆಣೈ, ಪ್ರೇಮಾಕಾರಂತ, ಗಂಗೂಬಾಯಿ ಹಾನಗಲ್(ಬದುಕು-ಬರಹ). ಸ್ತ್ರೀ ವಿಮುಕ್ತಿ ಚಿಂತನೆ ಒಂದು ಅಧ್ಯಯನ, ಕತೆಯಾದಳು ಹುಡುಗಿ (ಸಂಶೋಧನೆ),. ಕನ್ನಡ ಕಥನ ಸಾಹಿತ್ಯ ಮತ್ತು ಸ್ತ್ರೀ ನಿರ್ವಚನ (ಮಹಾ ಪ್ರಬಂಧ), ಅಂಚಿತ (ವಿಮರ್ಶೆ), ವಿಶೇಷ ಲೇಖಕಿ, ದೇವರು ಧರ್ಮದ ಚಿಂತೆ, ಅನನ್ಯ, ಸಮೃದ್ದಿ (ಕೆ, ಉಷಾಪಿ ರೈ ಅಭಿನಂದನಾ ಗ್ರಂಥ), ಕಮಲಾದೇವಿ ಚಟ್ಟೋಪಾಧ್ಯಾಯ (ಸಂಪಾದನೆ/ಸಹ ಸಂಪಾದನೆ). ಇವರ ‘ಕಾಳಿಗಂಗಾ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.